ಜ.9-11: ಸಾಮಗರ ಸಂಸ್ಮರಣ ಯಕ್ಷಗಾನ ಉತ್ಸವ: ಕೊಳ್ಯೂರಿಗೆ ‘ರಾಮದಾಸ ಸಾಮಗ’ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 6 , 2014
|
ಜನವರಿ 6, 2014
|
ಜ.9-11: ಸಾಮಗರ ಸಂಸ್ಮರಣ ಯಕ್ಷಗಾನ ಉತ್ಸವ: ಕೊಳ್ಯೂರಿಗೆ ‘ರಾಮದಾಸ ಸಾಮಗ’ ಪ್ರಶಸ್ತಿ
ಉಡುಪಿ :
ಉಡುಪಿ ತುಳುಕೂಟದ ವತಿ ಯಿಂದ ಹಿರಿಯ ಯಕ್ಷಗಾನ ಕಲಾವಿದ ದಿ.ಮಲ್ಪೆ ರಾಮದಾಸ ಸಾಮಗರ ನೆನಪಿನಲ್ಲಿ ತುಳು ಯಕ್ಷಗಾನ ಉತ್ಸವವನ್ನು ಜ.9, 10 ಮತ್ತು 11ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ.
9ರಂದು ಸಂಜೆ 5 ಗಂಟೆಗೆ ಯಕ್ಷಗಾನ ವಿಮ ರ್ಶಕ ಡಾ.ಕೆ.ಎನ್.ರಾಘವ ನಂಬಿಯಾರ್ ಉತ್ಸವವನ್ನು ಉದ್ಘಾಟಿಸಲಿರುವರು. ಮಲ್ಪೆ ರಾಮದಾಸ ಯಕ್ಷಗಾನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಡಾ.ಕೊಳ್ಯೂರು ರಾಮಚಂದ್ರ ರಾವ್ಗೆ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
9ರಂದು ಸಂಜೆ 6ಗಂಟೆಗೆ ಉಡುಪಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯಿಂದ ‘ತುಲಸೀ ಜಲಂಧರ’ ಬಡಗುತಿಟ್ಟು ಯಕ್ಷಗಾನ, 10ರಂದು ಸಂಜೆ 6:30ಕ್ಕೆ ‘ಕೋಟಿ ಚೆನ್ನಯೆ’ ತೆಂಕುತಿಟ್ಟು ಯಕ್ಷಗಾನ ತಾಳಮದ್ದಲೆ, 11ರಂದು ಸಂಜೆ 6:30ಕ್ಕೆ ‘ಕೋರ್ದಬ್ಬು’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದವರು ಹೇಳಿದರು. 12ರಂದು ಸಂಜೆ 5:30ಕ್ಕೆ ಕೆಮ್ತೂರು ತುಳುನಾಟಕ ಪ್ರಶಸ್ತಿ ಪ್ರದಾನ ಸಮಾ ರಂಭ ನಡೆಯಲಿದೆ. ಬಳಿಕ ಪ್ರಥಮ ಪ್ರಶಸ್ತಿ ವಿಜೇತ ಮುಂಬೈ ಕರ್ನಾಟಕ ಸಂಘದ ಕಲಾಭಾರತಿ ತಂಡದ ‘ಕೋಮಲ ಗಾಂಧಾರ’ ನಾಟಕದ ಮರುಪ್ರದರ್ಶನ ನಡೆಯಲಿದೆ.
ಗೋಷ್ಠಿಯಲ್ಲಿ ಉತ್ಸವದ ಸಂಚಾಲಕ ತಲ್ಲೂರು ಶಿವರಾಮ ಶೆಟ್ಟಿ, ಕೂಟದ ಕಾರ್ಯದರ್ಶಿ ಗಂಗಾಧರ್, ಕೋಶಾಧಿಕಾರಿ ಎಂ.ಜಿ. ಚೈತನ್ಯ, ಶ್ರೀಧರ ಕೋಳ್ಯೂರು ಉಪಸ್ಥಿತರಿದ್ದರು.
ಕೃಪೆ :
http://www.kannada.gulfkannadiga.com
|
|
|